Friday, July 31, 2009

ಬೆಳಕಿನೆಡೆಗೆ

ಬಡವರ ಮನೆಯ ದೀಪ ಮಣ್ಣಿನದು
ಧನಿಕನ ಮನೆಯ ದೀಪ ಬಂಗಾರದ್ಹು,
ಎರಡರ ಬೆಳಕು ಒಂದೇ..ಕಣ್ಣಿದ್ದರೂ ಕುರುಡಾದ ನಮಗೆ ,
ಮಂಕು ಕವಿದ ಮನಕೆ..ಒಳ್ಳೆಯ ಕನಸು ಬೀಳುವುದಾದರು ಹೇಗೆ?

ಹಣದಿಂದ ಬದಲಾಗಬಹುದು ಬದುಕು..ಬಾವನೆಗಳಲ್ಲ,
'ಧನಿಕನ-ಹಸಿವು' 'ಬಡವನ-ಹಸಿವು'ಎಂದು ಬೇರೆಯಿಲ್ಲ 'ಒಂದೇ ಎರಡು'

ಬದಲಾಗಬೇಕು ನಾವು ತಿಳಿದು ತಿಳಿಯಾಗಿಸಿ ಮನಸೆಂಬ-ನೀರು
ಅಂತರಾಳವ ತೊಳೆದು.. ವಿಶ್ವವೆಲ್ಲ ಒಂದಾಗಬೇಕು ಇಂದು
ಗಡಿರೇಖೆ ಗಳ ಹರಿದು .. ಜಾತಿ ಧರ್ಮ ಬಾಷೆ ಬೇದ-ಬಾವಗಳ ತೊರೆದು
ಆಗ ಮಾತ್ರ ಮುಂದಿನ ಪೀಳಿಗೆ ಬದುಕಬಹುದು ..ನಾಗರೀಕತೆಯೂ ಉಳಿದು..!

No comments:

Post a Comment