Friday, July 31, 2009

ಬೆಳಕಿನೆಡೆಗೆ

ಬಡವರ ಮನೆಯ ದೀಪ ಮಣ್ಣಿನದು
ಧನಿಕನ ಮನೆಯ ದೀಪ ಬಂಗಾರದ್ಹು,
ಎರಡರ ಬೆಳಕು ಒಂದೇ..ಕಣ್ಣಿದ್ದರೂ ಕುರುಡಾದ ನಮಗೆ ,
ಮಂಕು ಕವಿದ ಮನಕೆ..ಒಳ್ಳೆಯ ಕನಸು ಬೀಳುವುದಾದರು ಹೇಗೆ?

ಹಣದಿಂದ ಬದಲಾಗಬಹುದು ಬದುಕು..ಬಾವನೆಗಳಲ್ಲ,
'ಧನಿಕನ-ಹಸಿವು' 'ಬಡವನ-ಹಸಿವು'ಎಂದು ಬೇರೆಯಿಲ್ಲ 'ಒಂದೇ ಎರಡು'

ಬದಲಾಗಬೇಕು ನಾವು ತಿಳಿದು ತಿಳಿಯಾಗಿಸಿ ಮನಸೆಂಬ-ನೀರು
ಅಂತರಾಳವ ತೊಳೆದು.. ವಿಶ್ವವೆಲ್ಲ ಒಂದಾಗಬೇಕು ಇಂದು
ಗಡಿರೇಖೆ ಗಳ ಹರಿದು .. ಜಾತಿ ಧರ್ಮ ಬಾಷೆ ಬೇದ-ಬಾವಗಳ ತೊರೆದು
ಆಗ ಮಾತ್ರ ಮುಂದಿನ ಪೀಳಿಗೆ ಬದುಕಬಹುದು ..ನಾಗರೀಕತೆಯೂ ಉಳಿದು..!

ಗ್ರಹಚಾರ

ಊರ ಜನರಿಗೆಲ್ಲ
ಸೂರ್ಯ- ಚಂದ್ರ-ನಕ್ಷತ್ರ ತೋರಿಸಿ ,
ಗ್ರಹ ಗತಿ ಗಳನ್ನೂ ಗುಣಿಸಿ,
ಮದುವೆ ಮಾಡಿದ 'ಜ್ಯೋತಿಷಿ '
ಎಷ್ಟೇ ಪೂಜೆ , ವ್ರತ ,ಹವನ ಮಾಡಿ
ಮುಹೂರ್ತವಿಟ್ಟರೂ ಯಾಕೊ
ಮಧುವೆಯೇ ಆಗಲಿಲ್ಲ ಇನ್ನೂ
ಅವರ ಒಬ್ಬಳೇ ಸುಪುತ್ರಿ 'ಜ್ಯೋತಿ'

Sunday, July 19, 2009

ಪ್ರೀತಿಯ ಸೋನೆ

ಹನಿ ಹನಿ ಪ್ರೀತಿಯ ಹನಿಗಳು ಚೆಲುವೆ
ಪ್ರೀತಿಯ ಮಳೆಯಲಿ ನೆಂದಿರುವೆ
ಚಳಿ-ಚಳಿಯಾಗಿದೆ ಅಪ್ಪಿಕೊ ಬಾರೆ,
ಒಲವಿನ ಮುತ್ತನು ನಾಕೊಡುವೆ

ಮನಸಲಿ ಮೂಡಿದೆ ನಿನ್ನದೇ ಚಿತ್ರ
ನಿನ್ನ ನಗುವೇ ನನಗೆ ಪ್ರೇಮದ ಪತ್ರ
ನಿನ್ನಲಿ ಬೆರೆತು ಬೆವೆಯುವ ತವಕ
ನಿಲ್ಲದು-ನಿಲ್ಲದು ನಾನಿನ್ನ ಸೇರುವ ತನಕ

ಈ ಉಸಿರ ಕಣ-ಕಣದಲ್ಲೂ
ನಿನ್ನೆಸರೇ ತೇಲುತಿದೆ
ಈ ದೃದಯ ಪ್ರತಿ-ಮಿಡಿತದಲೂ
ನಿನ್ನೆನಪೇ ಮೂಡುತಿದೆ
ನಗುನಗುತಲೇ ನನ್ನ ನೀ ಸೆಳೆದೆ
ಕಣ್ಣಲೇ ನನ್ನ ಬಂದಿಸಿದೆ

ನನಗಾಗೇ ನೀ ಜನಿಸಿರುವೆ ಬಾರೆ
ವಿರಹದ ಬುಗಿಯಲಿ ಬೆಂದಿರುವೆ
ಬಿಡುಗಡೆಗಾಗಿ ಕಾದಿರುವೆ
ಬಿಡಿಸುಬಾರೆ ನನ್ನೊಲವೆ

ಹನಿ ಹನಿ ಪ್ರೀತಿಯ ಹನಿಗಳು ಚೆಲುವೆ
ಪ್ರೀತಿಯ ಮಳೆಯಲಿ ನೆಂದಿರುವೆ
ಚಳಿ-ಚಳಿಯಾಗಿದೆ ಅಪ್ಪಿಕೊ ಬಾರೆ,
ಒಲವಿನ ಮುತ್ತನು ನಾಕೊಡುವೆ

ದೇವರು

ಗುಡಿ ಘಂಟೆ ಗೋಪುರದ ಕೆಳಗೆ
ಮಸೀದಿ ಚರ್ಚು ಪ್ರರ್ಥನಾಲಯದ ಒಳಗೆ ,
ಸಿಗಲಿಲ್ಲ ನೀನು ಹುಡುಕಿದರೂ ನನಗೆ

ಹುಡುಕಿದೆ ನಿನ್ನ ಕುಂಕುಮ ತೀರ್ಥ ಪ್ರಸಾಧದೊಳಗೆ
ನಿನಗಾಗಿ ಅರ್ಪಿಸಿದ ಯಜ್ಞ ಕುಂಡದ ಕೆಳಗೆ ,
ಸಿಗಲಿಲ್ಲ ನೀನು ಅಧರಲ್ಲೂ ನನಗೆ

ಆರ್ಥ ನಾದಧಿ ಅಳುವ ಹಸಿದ ಹೊಟ್ಟೆಗಳಿಗೆ
ನಾ ಮನಬಿಚ್ಚಿ ಪ್ರೀತಿಯ ಕೈತುತ್ತು ನೀಡಿದೆ ,
ಆ ಕ್ಷಣದಿ ಆ ನಗುವ ಮುಖದಲ್ಲಿ ನಾ ನಿನ್ನ ಬೆಳಕಾಗಿ ಕಂಡೆ !

'ಜ್ಞಾನೋಧಯ'

ಇತರರ ಬದುಕಿನ
ಅಣು ಪರಮಾಣುಗಲೋಳಗೂ
ಇಣುಕಿ ನೋಡುವ ಮಂಗ ಮನ,
ಮೊದಲು ತನ್ನೊಳಗೆ ತಾನು ಇನುಕಿನೋಡಿದ ಕ್ಷಣ ,
ಆಗುವ ಅನುಭವಗಳ ಸತ್ಯ 'ಜ್ಞಾನೋಧಯ'

ಕಾಲ

ಮೂದಲಿಸಿದ ಚಿಗುರೆಲೆಗೆ ,
ಉದುರುವ ಹಣ್ಣೆಲೆ
ಹೇಳಿದ ಮಾತು ಒಂದೇ ,
ನಿನಗೂ ಕಾದಿದೆ ಮುಪ್ಪು ಮುಂದೆ !

ಗೊರಕೆ

ಹತ್ತು ಗಂಟೆಗೆ ಬಿದ್ದೆ
ಐದು ಗಂಟೆಗೆ ಎದ್ದೆ
ಬೆಳಕು ಕತ್ತಲ ನಡುವೆ
ಎಳೆಯುತಿತ್ತು ಸೊಂಪಾದ ನಿದ್ದೆ

ಮತ್ತೆ ಮಲಗಲು ಬಿದ್ದೆ
ಹಾಸಿಗೆಯ ಮದ್ಯೆ
ಬರಲಿಲ್ಲ ನಿದ್ದೆ ,
ಕೇಳಿಸಿದ್ದು ಬರೀ ಗೊರಕೆಗಳ ಸದ್ದೇ ..

ಗುಂಡು

'ಗುಂಡು' ಎಂದರೆ
ಕುಡುಕರಿಗೆ ಪ್ರೀತಿ ಅಪಾರ !
ಗುಂಡಿಗೆ ಬಿದ್ಹು ನಶೆ ಇಳಿದರೆ
ಉಚಿತ ನೋವು ಅಪಾರ ..ಅಹಾಕಾರ !

Saturday, July 18, 2009

ಖಾನವಳಿ

ಹುಡುಗರಿಗೆ ಮನೆಯಿದ್ದರೂ
ಖಾನವಳಿಯಲೇ ಖಾನ-ಪೀನ!
ಕಾರಣ ಬಡಿಸುವಾಗ ಕಾಣುವ
ಆಂಟಿಯ ಅಂಗ ಪ್ರದರ್ಶನ !

ಹೆಣ್ಣೇ? ನೀ ಗಂಡೇ?

ಇಂದು
'ಸರಿ?' ಎಂದರು
ಸಲಿಂಗ ರತಿ
ನಾಳೆ?,
ಯಾರು ಗಂಡು?
ಯಾರು ಹೆಣ್ಣು?
ಎಂದು
ಹುಡುಕುವುದೇ
ಪಜೀತಿ !

ಕೋಪ

ಸಮುದ್ರ ಮಥನದ
ವಿಷದಂತೆ 'ಕೋಪ'
ಅದನು ತಡೆಯಲು
ಹಿಡಿಯಲು ,ಕುಡಿಯಲು
'ಸ್ವತ ಶಿವನೀ' ಆಗಬೇಕು
ಇಲ್ಲವೇ ಶಿವನ ಪಾದ ಸೇರಬೇಕು !

ಅಳಲು

ಬೇಕೆಂದರೂ
ಬರುವುದಿಲ್ಲ
'ಮಳೆ'
ಕಾರಣ?
ಏಲ್ಲಿದೆ
ಗಿಡ ಮರ
ಜೀವ-ಸಂಕುಲಕೆ
'ನೆಲೆ?'

ತತ್ವ-ಜ್ಞಾನ

ಬದುಕು
ಎರಡೇ
ಪದದ
'ಕವನ-ಸಂಕಲನ'
ಅದರ ಹೆಸರೇ
'ಜನನ-ಮರಣ'

"ಪರಿ-ವರ್ತನೆ"

ನೆಟ್ಟಾಗ
ಅದು
ಬರೀ
ಗಿಡ,
ಹೂ ಬಿಟ್ಟಾಗ
ಅದೊಂದು
ಕವನ