Sunday, July 19, 2009

ದೇವರು

ಗುಡಿ ಘಂಟೆ ಗೋಪುರದ ಕೆಳಗೆ
ಮಸೀದಿ ಚರ್ಚು ಪ್ರರ್ಥನಾಲಯದ ಒಳಗೆ ,
ಸಿಗಲಿಲ್ಲ ನೀನು ಹುಡುಕಿದರೂ ನನಗೆ

ಹುಡುಕಿದೆ ನಿನ್ನ ಕುಂಕುಮ ತೀರ್ಥ ಪ್ರಸಾಧದೊಳಗೆ
ನಿನಗಾಗಿ ಅರ್ಪಿಸಿದ ಯಜ್ಞ ಕುಂಡದ ಕೆಳಗೆ ,
ಸಿಗಲಿಲ್ಲ ನೀನು ಅಧರಲ್ಲೂ ನನಗೆ

ಆರ್ಥ ನಾದಧಿ ಅಳುವ ಹಸಿದ ಹೊಟ್ಟೆಗಳಿಗೆ
ನಾ ಮನಬಿಚ್ಚಿ ಪ್ರೀತಿಯ ಕೈತುತ್ತು ನೀಡಿದೆ ,
ಆ ಕ್ಷಣದಿ ಆ ನಗುವ ಮುಖದಲ್ಲಿ ನಾ ನಿನ್ನ ಬೆಳಕಾಗಿ ಕಂಡೆ !

No comments:

Post a Comment