Monday, August 10, 2009

ಕಲೆ

ಮರೆತರೂ
ಮರೆಯಾಗಿ
ಕಾಡುವ
ನೆನಪು,
ನೆಪ ಹೇಳಿ
ಹೋಗುವುದು
ಎದೆಯ ಮೇಲೆ
ನಿನ್ನ ಗುರುತಾಗಿ
ಉಳಿದ
ಹೆಸರಿನ ಬಳಿಗೆ

Saturday, August 8, 2009

ಬಂದ

ನಲ್ಲೇ,

ನಿನ್ನ ತುಟಿಯೊಳಗಿನ ಕಾಂತದಿ ಸೆಳೆದು

ನನ್ನ ಚುಂಬಿಸಿ ನೋಡು, ಮತ್ತೇರಿ

ಮನ ಬೆತ್ತಲಾಗುತದೆ ಕತ್ತಲೊಳಗಿನ

ಮಾಯಾ ಲೊಕಕೆ ನುಗ್ಗಿ, ಬೆರಳು

ಬಿಡಿಸುವ ಚಿತ್ರಕೆ ನೀ ಸ್ಪರ್ಶವಾಗಿ

ಮಿಡಿದರೆ ಬಾವಗಳ ಮೀರಿದ ,

ಬಂದವಾಗುತದೆ ನಮ್ಮ ಮಿಲನ

ಬಾನಲ್ಲೆ! 'ಪ್ರೀತಿ'

ಬಾನಿನಲ್ಲಿ ಪ್ರೀತಿ ಗೂಡು ಕಟ್ಟಿ

ಹಕ್ಕಿಯಾಗಿ ಹಾರಿ ಮೋಡ ದಾಟಿ

ಹಾಡೋಣ ಪ್ರೇಮ ಗೀತೆಯ

ಬಿದಿಗೆ ಚಂದ್ರ ತೇಲುತ ಬಂದ

ಬೆಳ್ಳಿ ಬೆಳಕು ನಮಗೆ ತಂದ

ಎದ್ದು ನಿಂತವು ಮೋಡದ ಮರೆಯಲಿ

ಎಲ್ಲ ತಾರೆ ಹರಸುತ ನಗುತಲಿ

ಜನ್ಮ ಜನ್ಮದ ಬಂದ ನಮ್ಮದು

ನಾನು ನೀನು ಒಂದೇ ಎಂದಿಗೂ

ಪ್ರಾಯ ಸವೆದರು ನೂರು ವರುಷ

ಬತ್ತಿ ಹೋಗದು ಈ ಪ್ರೀತಿಯ ಹರುಷ

ನೊಂದ ಮನ

ಬೇಕಾದರೆ ತುಂಬಾಪ್ರಯತಿಸಿ ನೊಡು

ಆಗಲ್ಲ,ಕೃತಕವಾಗಿ ನಗುವುದು ಸೂಳೆ

ಸಿಂಗರಿಸಿಕೊಂಡು ಮಡಿವಂತ ಹೆಂಗಸರ

ಮುಂದೆ ಸಾವಿತ್ರಿಯ ಜಪ ಮಾಡಿದಂಗೆ

ನಗು ಏನಿದ್ದರೂ ದೃದಯಕ್ಕೆ ಸಂಬದಿಸಿದ್ದು

ಒಳಗಿಂದ ಚಿಮ್ಮಿದ್ದರೆ ಸ್ಪೂರ್ತಿಯ ಚಿಲುಮೆಯಂತೆ

ಮುಖದಿ ಹೂವಂತೆ ಅರಳಿರುತಿತ್ತು ,ನೀನು

ಮಾಡಿದ ಘಾಸಿಯಾದರೂ ಎಂತದು ನೋಡು

ಪ್ರೀತಿಯಿಂದ ನಗುತ್ತ ಹತ್ತಿರ ಬಂದ ಮಗುವಿಗೆ

ಜಿಗುಟಿದರೆ ಅತ್ತು ಸುಮ್ಮನಾದೀತು

ಸೂಜಿ ಸುಚ್ಚಿದರೆ ? ಮತ್ತೆ ಹತ್ತಿರ ಬಂದೀತೆ?

Friday, August 7, 2009

ಇಂದಿಗೂ

ನಿನ್ನ ವಂಚನೆಯ ನೆರಳಿಗೆ ಎಂಥಾ ಛಾಪು !

ಇಂದಿಗೂ ನರಳುತಿದೆ ಪ್ರೀತಿಯ ಮನ, ನೆನಪಾಗಿ

ಪದವಿಟ್ಟು ಪೊಣಿಸಿದ ನಿನ್ನ ಬರವಸೆಯ ಕವನ

ನಡುದಾರಿಯಲಿ ಎದೆಗೆ ನೀನಿಟ್ಟ ಕೊಳ್ಳಿಯನು ನೆನೆದು

ನಡುರಾತ್ರಿಯಲಿ ಹಿಂಡುತಿದೆ ದೃದಯವನು ಹಿಡಿದು

ನೋಡು, ಹೊತ್ತಿ ಹುರಿಯುತಿದೆ ನನ್ನೊಳಗೆ

ನೀನೇ ಕಟ್ಟಿದ ಕನಸಿನ ಗೂಡು

Thursday, August 6, 2009

ಕಾರಣ

ಭೂಮಿ ತಿರುಗಲು

ರವಿಯ ಪ್ರೀತಿ ಕಾರಣ

ಶಶಿಯ ಹೊಳಪಿಗೂ

ರವಿಯ ಬೆಳಕೇ ಕಾರಣ,

ಹೊರಗೆ ರವಿ ನಗುವ

ಕಾರಣ ತನ್ನೊಳಗೆ ತಾನೆ ಸುಡುವ

ಪ್ರೀತಿಯು ಕವಿದು

ನನ್ನ ದೃದಯದಿ ನೀ ಕುಳಿತು

ಪ್ರೀತಿಯ ಕೊಳಲ ನುಡಿಸಿರುವೆ

ನುಡಿಸಿ-ನುಡಿಸಿ ನನ್ನ ನಗಿಸು

ನುಡಿಸಿ-ನಡೆಸಿ ನನ್ನ ಬದುಕನು ಬೆಳಗಿಸು

ಕನಸಲಿ ನೀ ನನಗೆ ಮುತ್ತಿಟ್ಟರೆ

ನನಸಲಿ ಹರಿಯಿತು ಪ್ರೇಮದ

ವಿದ್ಯುತ್ತು ,ಮೆದುಳಿನಿಂದ ಪಾದದ ವರೆಗು

ನರ-ನಾಡಿ ಜೀವ-ಜೀವದ ಕಣಕೂ

ಹುಚ್ಚನಾದೆ ಪ್ರೀತಿಯು ಕವಿದು

ಎದೆಯೊಳಗೆ ಡವ-ಡವ ಡೊಲು

ಏನೂ ಕಾಣದು ನಿನ್ನನು ಹೊರೆತು

ದಿನವೆಲ್ಲಾ ಬರಿ ಹಗಲುಗನಸು.

ನೆನಪಲ್ಲಿ

ಬಾನಲ್ಲಿ ಹೊಳೆವ ಚುಕ್ಕಿಯಾಗಿ
ನೆನಪಲ್ಲಿ ಸಿಹಿಯ ಸ್ಪರ್ಶವಾಗಿ
ಹೊದಲ್ಲಿ ನನ್ನ ಜೊತೆ ನೀ ಚಿನ್ನ

ಚಿಟ್ಟೆಯ ಮೇಲೆ ಚಿತ್ತರವಾಗಿ
ಹೂವಿನ ಮೇಲೆ ಮಂಜಾಗಿ ಮೂಡಿ
ಆಪ್ಪಿಕೊಳ್ಳುವೆ ನಾ ದಿನವೂ ನಿನ್ನ

ಕತ್ತಲೊಳಗೆ ಬೆಳದಿಂಗಳಾಗಿ
ಒಲವಿನ ವನದೊಳು ಜೋಲಿ ಕಟ್ಟಿ
ತೂಗುವೆ ನಿನ್ನ ಮಲಗೆ ಚಿನ್ನ

ಮೊಹದಿ ಸೆಳೆದು ಕಣ್ಣಲ್ಲೇ ಕರೆದು
ಪ್ರೀತಿಯ ನಶೆಯ ನನ್ನಲ್ಲಿ ತುಂವಿದೆ
ನಾನು ತೇಲಾಡಿದೆ, ಬಾನೆಲ್ಲ ಹಾರಿದೆ

Wednesday, August 5, 2009

ಯಾರು 'ನಿನ್ನಂಗೆ'?

ನಲ್ಲೆ,

ನೀ ಹಾಲಲಿ ತೇಲಿದ

ಬೆಣ್ಣೆಯ ಗೊಂಬೆ

ರತಿ-ಮೇನಕೆ

ಊರ್ವಶಿ-ರಂಭೆ

ಯಾರು ಇಲ್ಲ

'ನಿನ್ನಂಗೆ'

'ಮೈಥುನ'

ಕಲ್ಪನೆಯ ಕಣ್ಣು

ಕಾಮದ ಕಗ್ಗತ್ತಲಲಿ

ಕಂಡ ಸುಂದರ ಕನಸು

'ಮೈಥುನ'

Tuesday, August 4, 2009

ಕುರಿಗಳಲ್ಲ ಪ್ರೇಮಿಗಳು

ಬಾನಿನಲ್ಲಿ ಒಂದು ಗೂಡು ಕಟ್ಟಿ
ಹಕ್ಕಿಯಾಗಿ ಹಾರಿ ಮೋಡ ದಾಟಿ
ಸಾಗೋಣ ಪ್ರೆಮಲೋಕಕೆ
ನಮಗಿಲ್ಲ ಬಂದನ ಯಾರ ಅಂಜಿಕೆ

ನಾನು ನೀನು ಒಂದೆ ಎಂದೂ
ಕೂಡಿ ಬಂತು ಸೇರೊ ಕಾಲ ಇಂದು
ಹಾಡೊಣ ಪ್ರೆಮ ಗೀತೆಯ
ಈ ಪಯಣ ಸಾಗಲಿ ಹೀಗೆಯೇ

ಬಿದಿಗೆ ಚಂದ್ರ ನಗುತಲೆ ಬಂದ
ಬೆಳ್ಳಿ ಬೆಳಕು ನಮಗೆ ತಂದ
ಎದ್ದು ನಿಂತವು ಮೋಡದ ಮರೆಯಲಿ
ಎಲ್ಲ ತಾರೆ ಹರಸುತ ನಗುತಲಿ

ಜನುಮ ಜನುಮದ ಬಂದ ನಮ್ಮದು
ಯಾರು ಬಂದರೂ ಬಿಡಿಸಲಾಗದು
ಬದುಕುವುದು ಜೊತೆಗೆ ,ಸಾಯುವುದು ಒಟ್ಟಿಗೆ
ಕುರಿಗಳಲ್ಲ ಪ್ರೇಮಿಗಳು ನಾವು

ಕರಡಿ -ಕುರುಡಿ

ಬಿಳಿ(ಹಿಮ) ಕರಡಿ

ಕಾಡಿಗೆ ಬಂದರೆ

ಕರಿ ಕರಡಿ ಹೇಳಿತಂತೆ

ಅದಕೆ 'ವಯಸ್ಸಾಗಿದೆ'

ಮುದಿ ಕರಡಿ ಅಂತ

Monday, August 3, 2009

ನೊಟ

ದಿಕ್ಕು-ದೆಸೆಗಳ ಲೆಕ್ಕಿಸದೆ ಎತ್ತೆತ್ತರ

ಮರಗಳಲೆ ಗೂಡು ಕಟ್ಟುವ ಹಕ್ಕಿಗಳ ನೋಡು,

ಆಯಾಮಗಳ ಬಂದನವಿಲ್ಲದೆ ಮನಸ್ಸೇಚ್ಚೆ

ಹೆಣೆಯುತಿದೆ ಸುಂದರ ಬಲೆಯ ಜೇಡು ,

ಮುಕ್ತ ಮನದಿ ಒಟ್ಟಿಗೆ ದುಡಿದರೆ ಗೆಲುವಿದೆ,

ನಮ್ಮೊಡನೆ ಬದುಕುವ ಗೆದ್ದಲು-ಇರುವೆಗಳ ನೋಡು

Sunday, August 2, 2009

ವಾಸ್ತವ

ಮನುಜ ಮಾತ್ರ ನೊಡುವುದು

ಜ್ಯೊತಿಷ್ಯ-ಗ್ರಹಗತಿ-'ವಾಸ್ತು'ವ

ಮನೆ ಕಟ್ಟಲು, ಮಲಗಲು,ತಿನ್ನಲು,

ತಿರುಗಲು,ಮಗ್ಗಲು ತಿರುಗಿಸಿ ಮುಖ ನೊಡಲು

ಮಕ್ಕಳಿಗೆ ಹೆಸರಿಡಲು, ಮದುವೆ, ಮುಂಜಿ, ಪ್ರಸ್ತ,

ಸತ್ತರೂ ಕೊನೆಗೆ ಕಳೆದು ವಾನಪ್ರಸ್ತ

ಮಿತಿ ಬೇಕು, ಬಿಡಿ 'ಡಾಂಭಿಕತೆ'

ನಿತ್ಯ ಬದುಕಿನ ಸುಂದರ ಸತ್ವ-ಸಾರವ ಬಿಟ್ಟು

ಯಾರದೊ ಮಾತಿಗೆ ಮನಸಿನ ನಿತ್ರಾಣ,

ಸಹಜ ಸ್ವತಂತ್ರ ಬಾವಗಳ ಬಂದಿಸಿ

ನಾವು ಬಧುಕುವುದು ಏಕೆ?

ಮತ್ಯರೋ ಮಾತಲ್ಲೆ ನಮ್ಮನ್ನು

ಯಾಂತ್ರಿಕವಾಗಿ ನಿಯಂತ್ರಿಸುವುದು ಬೇಕೆ?

ಸುಳಿವೇ ನೀಡದೆ ಸುತ್ತಿ ಬಂದೆರಗುವ

ಸುನಾಮಿ-ಭೂಕಂಪಗಳನು ತಡೆಯಲಾರದು

ಯಾವ ಜ್ಯೊತಿಷಿಯ 'ವಾಸ್ತು'ವು

ಬದುಕೇ ಅಂಗೆ, ಅನಿರೀಕ್ಷಿತವಾಗಿ ಬರುವ

ಸಾಗರದ ಅಲೆಗಳಂಗೆ,

ಇರಬೇಕು ಹಕ್ಕಿ ರೆಕ್ಕೆ-ಪುಕ್ಕಗಳ ಬಿಚ್ಚಿ ಹಾರಿದಂತೆ

ಪ್ರತಿಕ್ಷಣವು ನಕ್ಕು-ನಗಿಸುತ,

ಸ್ನೆಹ-ಪ್ರೀತಿ-ನೀತಿಗಳ ಹಂಚುತ

ಆಗಲೇ ಬದುಕು ಸಾರ್ಥಕ,

ಇದೇ ನಿತ್ಯ ಜೀವನದ 'ಸತ್ಯ-ವಾಸ್ತವ'.

ಭುವನ ಸುಂದರಿ

ಪ್ರೀತಿಯ ಕಡಲಲ್ಲಿ
ನೀ ಮಿಂದು ಬರಲು
ಬೆರಗಾಗಿ ನೊಡಿದವು
ಬಾನು-ಭುವಿಗಳು ಬೆರೆತು
ಆ ಸೂರ್ಯನೂ ಮಂಕಾದ
ನಿನ್ನ ಚೆಲುವನು ನೋಡಿ
ಮೈಮರೆತು , ನಿನ್ನ ನಸುನಕ್ಕ
ತುಟಿಗಳಿಗೆ ಅಪ್ಪಿಮುತ್ತಿಡಲು
ಕಾತುರದಿ ಬರುತಿಹವು ಆತುರದಿ
ಅಲೆಅಲೆಯು,ಆ ಅಲೆಯ ಬಿಂಬಗಳೆ
ನನ್ನ ಮನಸಿನ ಆಗಸದ ತುಂಬ
ರಂಗು-ರಂಗಾಗಿ ಚೆಲ್ಲಿವೆ, ಆಸೆ
ನಸುಗೆಂಪು ಬೆಳ್ಳಿಮೊಡದ ಒಳಗೆ ,
ಕಾದು ಕುಳಿತಿರುವೆ ಬಾ ಹಾಸಿ ,
ಒಲವನ್ನು ಕಾಮನ ಬಿಲ್ಲ ಕೆಳಗೆ
ತುಂಬಿ ಕೊಡು ಕೆಂಪು ತುಟಿಯಲಿ
ಅಮೃತ ವ ನಂಗೆ , ಸುರಿಯುವೆ
ಮಳೆಯಾಗಿ ಮತ್ತೆ ಅಪ್ಪಿಕೊ
ನೀ ಭುವಿಯಾಗಿ ಅಂಗೆ
ನದಿಯಾಗಿ-ಝರಿಯಾಗಿ,
ತೊರೆಯಾಗಿ-ಜೀವ ಜಲವಾಗಿ
ಹರಿವೆ, ನಮ್ಮ ಪ್ರೀತಿಯ ವಿಷಯ
ಭುವಿಗೆಲ್ಲಾ ಹೇಳಿ ನಿನ್ನೆದೆಯ
ಕಡಲಿಗೆ ಮತ್ತೆ ನಾ ಬರುವೆ
ಈ ಸೃಷ್ಟಿ ಚಲನೆಯ ಒಳಗೆ
ಸೂರ್ಯ-ಚಂದ್ರ-ನಕ್ಶತ್ರ ಗಳಿರುವವರೆಗೆ
ನಾ ನಿನ್ನ ಜೊತೆ ಇರುವೆ ಕೊನೆವರೆಗೆ .


Saturday, August 1, 2009

ನ ಸ್ವ(ಶ್ವ)ರ

ಗುಂಡಣ್ಣ ಕುಡಿದಾಗ

ಕೂಗುತ್ತಾನೆ

'ಬದುಕೇ ನಶ್ವರ '

ಹೆಂಡತಿ ಮುಂದೆ

ಬಂದಾಗ

ನ ಸ್ವರ

'ವೇದಾ'- ಅಂತ

ಸ್ವರ್ಗ ನರಕ ವೇನೆಂದು ತಿಳಿಯಲು
ಆತ್ಮ ಪರಮಾತ್ಮನನ್ನು ಅರಿಯಲು
ದಾರ್ಶನಿಕರು ವರ್ಷಗಟ್ಟಲೆ ಅಲೆಯುತ್ತಾರೆ
ದೇಶಾಂತರ ದೇವಾಲಯಗಳನ್ನು ,
ಸುಮ್ಮನೆ ಓದುತ್ತಾರೆ ಬದುಕೆಲ್ಲ 'ವೇದಾಂತ' ಗಳನ್ನೂ

ನಗಗೆ ಮೂರೇ ತಿಂಗಳಿಗೆ ,
'ಸ್ವರ್ಗ-ನರಕದ' ಅರಿವಾಯಿತು
ಕೇಳದೆಯೂ ' ಕಾಳಿ 'ಯ ದರ್ಶನವಾಯಿತು ..!

ನಾನೇನು ಮಾಡಲಿಲ್ಲ ಮದುವೆಯಾದೆ
ನನ್ನ ಹೆಂಡ್ತಿ 'ವೇದಾ' ಳನ್ನು

ನೊಂದವಳು

ಎಲ್ಲರೂ ತಂದರು
ಒಂದು ಮಾರು ಹೂ
ಒಂದು ತೆಂಗಿನ ಕಾಯಿ
ಅದ್ರ ಬೆಲೆ ಕೆವಲ ಹತ್ತು ರುಪಾಯಿ,
ಬಂದವರು ಐನೂರು ಜನ
ಅದರ ಒಟ್ಟು ಮೊತ್ತ ಐದು ಸಾವಿರ ರೂಪಾಯಿ
ಬದುಕಿದ್ದಾಗ ಕೊಟ್ಟಿದ್ದರೆ ಸಾಕಿತ್ತು ಔಷಧಿಗೆ
ಕೇವಲ ನೂರು ರೂಪಾಯಿ
ಬಕುಳಿಯುತಿದ್ದಳು ಆ ಮಹಾ-ತಾಯಿ

ತುಕ್ಕಿಡಿದ ಕಬ್ಬಿಣದಂತೆ

ಹಣದಿಂದ ಬಂಗಾರವಾಯಿತು ಬದುಕು

ಹೊಸ ಕಾರು,ಬಂಗಲೆ, ಬೈಕು

ಎನೂ ಮಾಡುವಂತಿಲ್ಲ ಎಲ್ಲದಕೂ ಆಳುಕಾಳು

ಸುಮ್ಮನಿದ್ದರೆ ನೀವು ಹಾಗೆ ತುಕ್ಕಿಡಿದ ಕಬ್ಬಿಣದಂತೆ

ಸುಮ್ಮನಾಗಬಹುದು ನಿಮ್ಮ ಕೈಕಾಲು-ದ್ರುದಯ-ಮೆದುಳು,

ನಮಗಿನ್ನು ಕೆಲಸವಿಲ್ಲವೆಂದು ಮೂತ್ರ-ಪಿಂಡ ನರ-ನಾಡಿಗಳ ಜೊತೆ ತಣ್ಣಗಾದರೆ ಮನಸು

ಮತ್ತೆ ಏಳುವುದು ಬರೀ ಕನಸು..!