Sunday, August 2, 2009

ವಾಸ್ತವ

ಮನುಜ ಮಾತ್ರ ನೊಡುವುದು

ಜ್ಯೊತಿಷ್ಯ-ಗ್ರಹಗತಿ-'ವಾಸ್ತು'ವ

ಮನೆ ಕಟ್ಟಲು, ಮಲಗಲು,ತಿನ್ನಲು,

ತಿರುಗಲು,ಮಗ್ಗಲು ತಿರುಗಿಸಿ ಮುಖ ನೊಡಲು

ಮಕ್ಕಳಿಗೆ ಹೆಸರಿಡಲು, ಮದುವೆ, ಮುಂಜಿ, ಪ್ರಸ್ತ,

ಸತ್ತರೂ ಕೊನೆಗೆ ಕಳೆದು ವಾನಪ್ರಸ್ತ

ಮಿತಿ ಬೇಕು, ಬಿಡಿ 'ಡಾಂಭಿಕತೆ'

ನಿತ್ಯ ಬದುಕಿನ ಸುಂದರ ಸತ್ವ-ಸಾರವ ಬಿಟ್ಟು

ಯಾರದೊ ಮಾತಿಗೆ ಮನಸಿನ ನಿತ್ರಾಣ,

ಸಹಜ ಸ್ವತಂತ್ರ ಬಾವಗಳ ಬಂದಿಸಿ

ನಾವು ಬಧುಕುವುದು ಏಕೆ?

ಮತ್ಯರೋ ಮಾತಲ್ಲೆ ನಮ್ಮನ್ನು

ಯಾಂತ್ರಿಕವಾಗಿ ನಿಯಂತ್ರಿಸುವುದು ಬೇಕೆ?

ಸುಳಿವೇ ನೀಡದೆ ಸುತ್ತಿ ಬಂದೆರಗುವ

ಸುನಾಮಿ-ಭೂಕಂಪಗಳನು ತಡೆಯಲಾರದು

ಯಾವ ಜ್ಯೊತಿಷಿಯ 'ವಾಸ್ತು'ವು

ಬದುಕೇ ಅಂಗೆ, ಅನಿರೀಕ್ಷಿತವಾಗಿ ಬರುವ

ಸಾಗರದ ಅಲೆಗಳಂಗೆ,

ಇರಬೇಕು ಹಕ್ಕಿ ರೆಕ್ಕೆ-ಪುಕ್ಕಗಳ ಬಿಚ್ಚಿ ಹಾರಿದಂತೆ

ಪ್ರತಿಕ್ಷಣವು ನಕ್ಕು-ನಗಿಸುತ,

ಸ್ನೆಹ-ಪ್ರೀತಿ-ನೀತಿಗಳ ಹಂಚುತ

ಆಗಲೇ ಬದುಕು ಸಾರ್ಥಕ,

ಇದೇ ನಿತ್ಯ ಜೀವನದ 'ಸತ್ಯ-ವಾಸ್ತವ'.

1 comment: